
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹನೆಹಳ್ಳಿ ಗ್ರಾಮದ ಕಂಪ ಎಂಬಲ್ಲಿ ಬಾರ್ಕೂರು-ಉಡುಪಿ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಹಳಿ ಕಂಬ 676/04 ರಿಂದ 676/08ರ ಕೀ.ಮಿ ಕಂಬದ ಮಧ್ಯೆ ಸುದೀಪ ಭಂಡಾರಿ ಪ್ರಾಯ: 47 ವರ್ಷ ತಂದೆ: ಗೋಪಾಲ ಭಂಡಾರಿ, ಹುತ್ತುರ್ಕೆ ಚಾರ ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ. ಎಂಬುವರು ರಾತ್ರಿ ಸುಮಾರು 8:24 ಗಂಟೆಗೆ ಮಂಗಳೂರು ಕಡೆಯಿಂದ ಮಡ್ಗಾವ್ ಕಡೆಗೆ ಚಲಿಸುತ್ತಿದ್ದ ಬಾಕ್ಸನ್ ಗೂಡ್ಸ್ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬಾರ್ಕೂರು ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಶ್ರೀನಿವಾಸ ಶೆಟ್ಟಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಸಂಖ್ಯೆ: 69/2025 ಕಲಂ: 194 ಬಿಎನ್ಎಸ್ಎಸ್ ರಂತೆ ಪ್ರಕರಣದ ದಾಖಲಾಗಿ ತನಿಖೆಯಲ್ಲಿರುತ್ತದೆ.
ಮೃತದೇಹದ ಮೇಲೆ ಶವ ತನಿಖೆ ನಡೆಸಿ ಬಳಿಕ ಕೆಎಂಸಿ ಮಣಿಪಾಲದಲ್ಲಿ ವೈದ್ಯಕೀಯ ಶವ ಪರೀಕ್ಷೆಗೆ ಒಳಪಡಿಸಿ ಮೃತದೇಹವನ್ನು ಮೃತರ ರಕ್ತ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.
ಮೃತರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಕಾರಣವನ್ನು ಮುಂದಿನ ತನಿಖೆಯಲ್ಲಿ ತಿಳಿದುಕೊಳ್ಳಲಾಗುವುದು.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now