ತೀವ್ರ ಅಸ್ವಸ್ಥರ ರಕ್ಷಣೆ ; ಸೂಚನೆ

ತೀವ್ರ ಅಸ್ವಸ್ಥರ ರಕ್ಷಣೆ ; ಸೂಚನೆ

0Shares

ಉಡುಪಿ. ಸೆ.28 :- ಕಳೆದ ನಾಲ್ಕು ದಿನಗಳಿಂದ ಬ್ರಹ್ಮಾವರ ನಾಲ್ಕೂರು ಬಳಿಯ ಸಭಾ ಭವನದ ಜಗುಲಿಯಲ್ಲಿ ವ್ಯಕ್ತಿಯೋರ್ವರು ಅನಾರೋಗ್ಯದಿಂದ ರಕ್ತ ಉಗುಳುತ್ತಿದ್ದು ಸ್ಥಳಿಯ ಸಮುದಾಯ ಆರೋಗ್ಯಾಧಿಕಾರಿ ಮಾನಸರವರ ಸಹಾಯದಿಂದ ವಿಶುಶೆಟ್ಟಿಯವರು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವ್ಯಕ್ತಿ ಮಂಜುನಾಥ ಶೆಟ್ಟಿಗಾರ್ (38) ರಕ್ಷಣೆಗೆ ಒಳಪಟ್ಟವರು. ಹೆಚ್ಚಿನ ಚಿಕಿತ್ಸೆಗೆ ಸಂಬಂಧಿಕರ ಅಗತ್ಯವಿದೆ. ನಾಲ್ಕು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗಮನಿಸಿದ ಸಮುದಾಯ ಆರೋಗ್ಯ ಅಧಿಕಾರಿ ಮಾನಸ ರೋಗಿಗೆ ಸಂತೈಸಿ, ಪ್ರಥಮ ಚಿಕಿತ್ಸೆ ಜೊತೆಗೆ ಆಹಾರ ನೀಡಿ ಸ್ವಂದಿಸಿದರು. ಮಾಹಿತಿ ಪಡೆದ ವಿಶುಶೆಟ್ಟಿಯವರು ಆರೋಗ್ಯ ಅಧಿಕಾರಿಯ ಸಹಾಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಸಂಬಂಧಿಕರು ಜಿಲ್ಲಾಸ್ಪತ್ರೆಯನ್ಬು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now