
ಏಪ್ರಿಲ್ 3 ನೇ ತಾರೀಕು ಗುರುವಾರದಂದು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದ ಕಟಾಕ್ಷದ ಆನೆಕಲ್ಲು ಬೊಬ್ಬರ್ಯ ದೈವಸ್ಥಾನದ ನವೀಕರಿಸಿರುವ ಸಾನಿಧ್ಯದಲ್ಲಿ ಬಾರ್ಕೂರು ವಿದ್ವಾನ್ ಉಮೇಶ್ ಬಾಯರಿ ಇವರ ಧಾರ್ಮಿಕ ಮಾರ್ಗದರ್ಶನದಲ್ಲಿ ಪುನರ್ ಪ್ರತಿಷ್ಟೆಯನ್ನು ಹಮ್ಮಿಕೊಳ್ಳಲಾಯಿತು*
ಈ ಪ್ರಯುಕ್ತ ಪ್ರತಿಷ್ಠೆ ಪೂಜೆ ಹೋಮಾದಿ ಧಾರ್ಮಿಕ ಕಾರ್ಯಕ್ರಮ , ಅನ್ನಸಂತರ್ಪಣೆ ಜರುಗಿತು.
ನವೀಕೃತ ಸಾನಿಧ್ಯ ನಿರ್ಮಾಣ ಮಾಡಿಕೊಟ್ಟು ಊರವರ ಪ್ರಶಂಸೆಗೆ ಪಾತ್ರರಾದ ದಾನಿ ರೋಯಲ್ ರತ್ನಾಕರ್ ಡಿ ಶೆಟ್ಟಿ, ಪತ್ನಿ ಶಾರಿಕಾ ಆರ್ ಶೆಟ್ಟಿ ಮಗ ಶಿವಪ್ರಸಾದ್ ಶೆಟ್ಟಿ, ಇವರನ್ನು ವಿದ್ವಾನ್ ಉಮೇಶ್ ಬಾಯರಿ ಇವರು ಮೂಡು ಅಮ್ಮುಂಜೆ ಎಂಟು ಮನೆ ಬಂಟ ಕುಟುಂಬಸ್ಥರು ಹಾಗೂ ಊರ ಹತ್ತು ಸಮಸ್ತರು, ಭಕ್ತಾಭಿಮಾನಿಗಳ ಪರವಾಗಿ ಸನ್ಮಾನಿಸಿ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಶೀಘ್ರವಾಗಿ ದೈವಸ್ಥಾನದ ನಿರ್ಮಾಣಕ್ಕೆ ಸಹಕರಿಸಿದ ಸ್ಟೀವನ್ ಸಂತೆಕಟ್ಟೆ, ಭಗತ್ ಹಾಗೂ ವಿದ್ಯುತ್ ಗುತ್ತಿಗೆದಾರರಾದ ಮಾಧವ ಪಾಣ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿ ಎ. ಕೃಷ್ಣ ನಾಯಕ್ ಗಣೇಶ್ ಸ್ಟೋರ್, ಅಮ್ಮುಂಜೆ ಬಬ್ಬುಸ್ವಾಮಿ ದೇವಸ್ಥಾನದ ಮೊಕ್ತೆಸರರಾದ ಪ್ರಶಾಂತ್ ಶೆಟ್ಟಿ ಕೆಳಕುದ್ರು , ಶಿವಪುರ ಪಾಂಡು ಕಲ್ಲು ಗರಡಿಯ ಕೊಡಿಮಣಿತ್ತಾಯ ದೈವದ ಪರಂಪರೆಯ ಮನೆತನದ ಪಾತ್ರಿ ಮುಕ್ಕಾಲ್ ಶೆಟ್ರು ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಬಾಲಕೃಷ್ಣ ಶೆಟ್ಟಿ ನರ್ನಾಡು, ಕುಟುಂಬದ ಹಿರಿಯರಾದ ಸುಂದರ ಶೆಟ್ಟಿ ಹಾವಂಜೆ ಗೂಳೆ , ಭಾಸ್ಕರ್ ಡಿ ಶೆಟ್ಟಿ, ಭುಜಂಗ ಶೆಟ್ಟಿ ಸಹೋದರರು ಶಬರಿಮನೆ ಅಮ್ಮುಂಜೆ, ಗುರಿಕಾರ ಕೃಷ್ಣ ಪೂಜಾರಿ ಮೂಡು ಅಮ್ಮುಂಜೆ ಇವರೆಲ್ಲರೂ ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗಿಸಿದರು.









Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























