
ಅಸಾಂಕ್ರಮಿಕ ರೋಗಗಳ ತಪಾಸಣೆ ಮತ್ತು ಅಪಸ್ಮಾರ ಕಾಯಿಲೆ ಬಗ್ಗೆ ಮಾಹಿತಿ ವಿಶ್ವ ಅಪಸ್ಮಾರ ದಿನ-2025ರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಮತ್ತು ನರವಿಜ್ನಾನ ವಿಭಾಗ ಕೆ ಎಮ್ ಸಿ ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರ ಮೂಡುಬೆಟ್ಟು ಲಯನ್ಸ್ ಕ್ಲಬ್ ಉದ್ಯಾವರ ಜಂಟಿಯಾಗಿ ಜನಜಾಗೃತಿ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಲಯನ್ಸ್ ಸೇವಾ ಸದನ ಉದ್ಯಾವರ ಇಲ್ಲಿಹಮ್ಮಿಲಾಯಿತು.
ಕಾರ್ಯಕ್ರಮವನ್ನು ಉದ್ಯಾವರ ಗ್ರಾಮ ಪಂಚಾಯತ್ ಅದ್ಯಕ್ಷೆ ಮಾಲತಿ ಸಾಲಿಯಾನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ ನರವಿಜ್ನಾನ ವಿಭಾಗದ ಡಾ ಶರತ್ ಪಿ ಎಸ್ ಅಪಸ್ಮಾರ ಕಾಯಿಲೆ ಬಗ್ಗೆ ಮಾಹಿತಿ ನೀಡಿ ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಅಸೋಸಿಯೆಟ್ ಪೆÇ್ರಫೆಸರ್ ಡಾ.ದಿವ್ಯ ವಿ ಪೈ, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಾಕ್ಷ ರಾಜೇಶ್ ಕುಂದರ್, ಪ್ರತಾಪಕುಮಾರ್ -ಅಧ್ಯಕ್ಷರು ಎಸ್ ಸಿ ಐ ಉದಯಕಿರಣ ಕುತ್ಪಾಡಿ, ಕಾರ್ಯದರ್ಶಿ ಲ.ಕ್ಲಭ್ಉದ್ಯಾವರ, ಡಾ ರವೀಂದ್ರ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಯಾವರ.
ಶ್ರೀಮತಿ ಸುಲೋಚನಾ ಶ್ರೀಮತಿ ಪ್ರೇಮ ಶ್ರೀಮತಿ ಹೇಮಾ ಶ್ರೀಮತಿ ಲವಿನಾ ಉಪಸ್ಥಿತರಿದ್ದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇ ಸಿ ಜಿ ತಪಾಸಣೆ ನಡೆಸಲಾಯಿತು. 60ಕ್ಕೂ ಅಧಿಕ ಶಿಭಿರಾರ್ಥಿಗಳು ಶಿಬಿರದ ಪ್ರಯೋಜವನ್ನು ಪಡೆದುಕೊಂಡರು. ಸಮುದಾಯ ವೈದ್ಯಕೀಯ ವಿಭಾಗದ ವಿದ್ಯಾ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























