
ಮುಂಬಯಿ (ಆರ್ಬಿಐ), ಅ.೧೩: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ. ಎಸ್.ಕೆ.ಬಿ. ಎಸೋಸಿಯೇಶನ್ನ ಸಹಯೋಗದೊಂದಿಗೆ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಮಹಾ ನವಮಿ ಪುಣ್ಯ ದಿನವಾದ ಶನಿವಾರ(ಅ.೧೨) ರಂದು ದೀಪಾರಾಧನೆಯನ್ನು ಗೋಕುಲ ಸಭಾಗೃಹದಲ್ಲಿ ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿತು.
ಪ್ರಧಾನ ಪುರೋಹಿತ, ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ಸಾಂಗವಾಗಿ ನೆರವೇರಿತು. ಸಭಾಗೃಹದಲ್ಲಿ ಪುರೋಹಿತ ವರ್ಗದವರು ಬೃಹತ್ ಮಂಡಲ ರಚಿಸಿ, ಮಂಡಲ ಮಧ್ಯದಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಿ, ಸಪ್ತಶತಿ ಪಾರಾಯಣ, ಭುವನೇಶ್ವರಿ ಪೂಜೆ, ಲಲಿತಾ ಸಹಸ್ರನಾಮ ಪಠನೆ ಇತ್ಯಾದಿ ಪೂಜಾ ವಿಧಿ – ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ದೀಪಾರಾಧನೆ ನೆರವೇರಿಸಿದರು. ಯಜಮಾನ ಸ್ಥಾನವನ್ನು ಸಂಘದ ಉಪಾಧ್ಯಕ್ಷರಾದ ಅವಿನಾಶ್ ಶಾಸ್ತ್ರೀ, ಶ್ರೀಮತಿ ಶ್ಯಾಮಲಾ ಶಾಸ್ತ್ರಿ ದಂಪತಿ ವಹಿಸಿದ್ದರು. ಶ್ರೀ ರಾಮವಿಠಲ ಕಲ್ಲೂರಾಯರು ಸೇವಾಥಿsಗಳಿಗೆ ಸಂಕಲ್ಪ ನೆರವೇರಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























